ರಿಲಯನ್ಸ್ ಫೌಂಡೇಶನ್ ಇವರು ಕೃಷಿ ಸಂಶೋಧನಾ ಕೇಂದ್ರ, ಬೆಳಗಾವಿ ಇವರ ಸಹಯೋಗದೊಂದಿಗೆ ನೀಡುತ್ತಿರುವ ಕೃಷಿ ಸಲಹೆ. ನಿಮ್ಮ ಮಣ್ಣಿನಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಮೂಲಕ, ನಿಮ್ಮ ತೋಟದ ಆರೋಗ್ಯ ಮತ್ತು ಉತ್ಪಾದಕತೆಯನ್ನುಸುಧಾರಿಸಲು ರಸಗೊಬ್ಬರಗಳು, ತಿದ್ದುಪಡಿಗಳು ಮತ್ತು ಇತರ ತಂತ್ರಗಳ ಬಗ್ಗೆ ನೀವು ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಮಣ್ಣಿನ ಆರೋಗ್ಯವನ್ನು ತಿಳಿಯಲು ಮಣ್ಣಿನ ಪರೀಕ್ಷೆಯು ಅತ್ಯಗತ್ಯ. ರಸಗೊಬ್ಬರದ ಪ್ರಮಾಣ, ಮಣ್ಣಿನ ಸಂರಕ್ಷಣೆ ಮತ್ತು ಗೊಬ್ಬರ ಯಾವ ಪ್ರಕಾರ ಹಾಕಬೇಕುಎಂದು ತಿಳಿದುಕೊಳ್ಳಬಹುದು. ಮುಂದಿನ ಬೆಳೆಗೂ ಮೊದಲೇ ನಿಮ್ಮ ಜಮೀನಿನ ಮಣ್ಣು ಸ್ಯಾಂಪಲ್ ಅನ್ನು ಹತ್ತಿರದ ಕೆ ವಿ ಕೆ ಅಥವಾ ಕೃಷಿ ಇಲಾಖೆಗೆ ಕಳುಹಿಸಿ ಮಣ್ಣಿನ ಪೋಷಕಾಂಶಗಳನ್ನು ತಿಳಿಯಿರಿ. ಇದರಿಂದ ನಿಮ್ಮ ಬೆಳೆಗೆ ಆಗುವ ಖರ್ಚು ಕಡಿಮೆ ಮಾಡಬಹುದು.
| Comment | Author | Date |
|---|---|---|
| Be the first to post a comment... | ||
Copyright © 2026 Reliance Foundation. All Rights Reserved.